ಆತ್ಮೀಯರೇ,
ಸ್ಥಳೀಯ ಲೇಖಕರಿಗೆಂದು ಎಂಟು ವರ್ಷಗಳ ಹಿಂದೆ ಆರಂಭವಾದ ಈ ನಮ್ಮ ಪುಟ್ಟ ಪತ್ರಿಕೆಗೆ ಇಂದು ದೇಶವಿದೇಶಗಳಿಂದ ಅನೇಕ ಲೇಖಕರನ್ನೂ ಓದುಗರನ್ನೂ ಆಕರ್ಷಿಸಿ, ಪ್ರೋತ್ಸಾಹಿಸಿ, ಬೆನ್ತಟ್ಟಿ, ಹರಸಿ-ಹಾರೈಸಿ, ಅಭಿನಂದಿಸಿ, ನಮ್ಮನ್ನು ತಿದ್ದಿ-ತೀಡಿ, ತಪ್ಪುಗಳನ್ನು ತಿಳಿಸಿ ಎಲ್ಲರೀತಿಯಲ್ಲೂ ಬೆಳೆಸಿದ ಪ್ರತಿಯೊಬ್ಬ ಓದುಗರಿಗೂ, ಲೇಖಕರಿಗೂ, ಸಂಪಾದಕೀಯ ಮತ್ತು ಸಹಾಯಕರಿಗೂ ನೂರು ವಂದನೆಗಳು.
ನೂರನೇ ಸಂಚಿಕೆ ಹೆಮ್ಮೆತರುವ ವಿಷಯವಾದರೂ ಲೇಖಕರ ಸಂಖ್ಯೆ ಹೆಚ್ಚುತ್ತಿದ್ದರೂ ಓದುಗರ ಸಂಖ್ಯೆ ತಿಂಗಳಿಗೆ ಇನ್ನೂ ಒಂದರಿಂದ ಒಂದೂವರೆ ಸಾವಿರವಷ್ಟೇ ಇದೆ. ಈ ದೊಡ್ಡ ಓದುಗರ ಮೊತ್ತಕ್ಕೆ ತಮ್ಮೆಲ್ಲರ ಕಾಣಿಕೆ ಬಹು ಮುಖ್ಯವಾಗಿದೆ. ಅದೆಷ್ಟು ಹೊಸ ವಿಚಾರಗಳು ನಿಮ್ಮಿಂದ ನಾವೆಲ್ಲಾ ಅರಿತೆವು. ತಾಯ್ನುಡಿಯಲ್ಲಿ ಓದಿದ ಸವಿ ಸೌಭಾಗ್ಯ ಮರೆಯಲಾಗದು. ಮತ್ತಷ್ಟು ಉತ್ತಮ ಲೇಖನಗಳು ಚಿಮ್ಮುವಂತಾಗಲಿ ಇನ್ನಷ್ಟು ಓದುಗರ ಕೈಸೇರಲಿ ಎನ್ನುವ ಆಶಯ ನಮ್ಮದು.
ಕೃತಜ್ಞತೆ
- ಚಿಲುಮೆ ಆರಂಭವಾದ ಮೊದಲೈದು ವರ್ಷ ನಿರಂತರ ಸಂಪಾದಕೀಯ ಸೇವೆ ಸಲ್ಲಿಸಿದ ಶ್ರೀ ಬದರಿ ತ್ಯಾಮಗೊಂಡ್ಲು ರವರಿಗೂ,
- ಸಂಕಲನಾ ಕಾರ್ಯದಲ್ಲಿ ಸಹಾಯರಾದ ಶ್ರೀ ನಾಗೇಂದ್ರ ಅನಂತಮೂರ್ತಿ, ಶ್ರೀಮತಿ ವೀಣಾ ಸುದರ್ಶನ್, ಶ್ರೀಮತಿ ರಾಜಲಕ್ಷ್ಮಿ ನಾರಾಯಣ ರವರಿಗೂ,
- ನಿರಂತರ ನೂತನ ಲೇಖಕರನ್ನು ಚಿಲುಮೆಗೆ ಪರಿಚಯಿಸುತ್ತಿರುವ ಶ್ರೀ ಶಶಿಕುಮಾರ್ ಸೂರ್ಯನಾರಾಯಣ ರಾವ್ ಅವರಿಗೂ,
- ಪದಪುಂಜ ರಚನಕಾರರಾದ ಶ್ರೀಯುತ ನಾಗಶೈಲಕುಮಾರ್, ಶ್ರೀಯುತ ಮಿಥುನ್ ಗುಡ್ಡೇತೋಟ, ಶ್ರೀಮತಿ ಸಿಂಧುಶ್ರೀ ಸಂದೇಶ್ ರವರಿಗೂ,
- ಆಸಕ್ತ ಲೇಖನಗಳನ್ನು ಒದಗಿಸಿದ ಶ್ರೀಯುತರಾದ ಡಾ ಸಿ ವಿ ಮಧುಸೂದನ, ಶ್ರೀಯುತ ಸಿಡ್ನಿ ಶ್ರೀನಿವಾಸ್, ಶ್ರೀಮತಿ ಆಶಾ ವಿಶ್ವನಾಥ್, ಶ್ರೀಯುತ ಅಶೋಕ್ ಕುಮಾರ್, ಶ್ರೀಯುತ ರಾಮಮೂರ್ತಿ ಬೆಸಿಂಗ್ ಸ್ಟಾಕ್, ಶ್ರೀಯುತ ಬೇಲೂರು ರಾಮಮೂರ್ತಿ, ಶ್ರೀಯುತ ಅಣುಕುರಾಮನಾಥ್, ಶ್ರೀಯುತರಾದ ಡಾ ಅನಂತ ರಾವ್, ಶ್ರೀಯುತ ನಾಗಶೈಲ ಕುಮಾರ್, ಶ್ರೀಯುತ ಅಶ್ವಿನ್, ಶ್ರೀಯುತರಾದ ಡಾ ಆನಂದ, ಶ್ರೀಮತಿ ರಾಜೇಶ್ವರಿ ಜಯದೇವ್, ಶ್ರೀಯುತ ಸುದರ್ಶನ್, ಶ್ರೀಯುತ ಪರಮೇಶ್ , ಶ್ರೀಮತಿ ಸ್ಮಿತಾ ಮೇಲ್ಕೋಟೆ, ಶ್ರೀಮತಿ ಅನು ಶಿವರಾಂ, ಶ್ರೀಯುತ ಕೃಷ್ಣಪ್ರಸಾದ್, ಶ್ರೀಯುತ ಉಲ್ಲಾಸ್ , ಶ್ರೀಯುತ ಮಹಂತೇಶ್, ಶ್ರೀಯುತ ದತ್ತು ಕುಲಕರ್ಣಿ, ಶ್ರೀಯುತ ಶ್ರೀನಿವಾಸ ಪುಟ್ಟಿ, ಶ್ರೀಮತಿ ದೀಪಿಕಾ, ಶ್ರೀಮತಿ ಸಿಂಧುಶ್ರೀ, ಶ್ರೀಮತಿ ಇಂದುಶ್ರೀ, ಶ್ರೀಯುತ ನಾಶ್ರಿ ಹೆಬ್ಳಿಕರ್, ಶ್ರೀಮತಿ ಡಾ ಮಂಜುಳಾ, ಶ್ರೀಮತಿ ಶೀಲಾ, ಶ್ರೀಮತಿ ಭಾರತಿ, ಶ್ರೀಮತಿ ಹೇಮಾ, ಶ್ರೀಯುತ ರಾಘವೇಂದ್ರ, ಶ್ರೀಯುತ ವಿನೋದ್, ಶ್ರೀಮತಿ ಸಂಧ್ಯಾ ಶರ್ಮ, ಶ್ರೀಮತಿ ಉಮಾ ಕಟ್ಟಿ, ಶ್ರೀಮತಿ ಅಂಬಮ್ಮ,ಶ್ರೀಯುತ ಶಿವಶಂಕರ ಹಾಗೂ ಉಳಿದ ಎಲ್ಲಾ ಲೇಖಕ ಲೇಖಕಿಯರಿಗೂ,
- ಭಾರತೀಯ ಪಾರಂಪರೆಯ ರಂಗೋಲಿ ಪ್ರತಿ ತಿಂಗಳೂ ನಮ್ಮ ಪತ್ರಿಕೆಗೆ ಬರೆದು ಕಳುಹಿಸಿ ಹಂಚಿಕೊಂಡ ಶ್ರೀಮತಿ ಪುಷ್ಪಾ ವೆಂಕಟೇಶ್, ಶ್ರೀಮತಿ ಪುಷ್ಪವಲ್ಲಿ, ಶ್ರೀಮತಿ ನಳಿನಾ ವೆಂಕಟ್ ನಾಗ್, ಶ್ರೀಮತಿ ಪ್ರೇಮಾ ಅನಂತ ಕೃಷ್ಣ, ಶ್ರೀಮತಿ ವತ್ಸಲಾ ದ್ವಾರಕಾನಾಥ್, ಕು| ದಿವ್ಯಾಶ್ರೀ, ಶ್ರೀಮತಿ ನಾಗಶ್ರೀ ಹರ್ಷ, ಶ್ರೀಮತಿ ಲತಾ ಹೇಮಂತ್, ಶ್ರೀಮತಿ ಸುಧಾ ಮುರಳೀಧರ್, ಶ್ರೀಮತಿ ಶೀಲಾ ರಾಮಚಂದ್ರ, ಶ್ರೀಮತಿ ಸುಮನ್, ಶ್ರೀಮತಿ ಭಾಗ್ಯ ಶ್ರೀನಾಥ್, ಶ್ರೀಮತಿ ಶ್ರೀ ರಂಜನಿ, ಶ್ರೀಮತಿ ತಾರಾಮಣಿ ಇವರೆಲ್ಲರಿಗೂ,
ಹೊರನಾಡ ಚಿಲುಮೆಯ ಪರವಾಗಿ
ಹೃತ್ಪೂರ್ವಕ
ಧನ್ಯವಾದಗಳು
ಇಂತಿ
ಹೊರನಾಡ
ಚಿಲುಮೆಯ ಪ್ರಚಾರಕ
/ ಸಂಪಾದಕ
ಕನಕಾಪುರ
ನಾರಾಯಣ (ನಾಣಿ)
ReplyDeleteಎಲ್ಲ ಓದುಗರ, ಲೇಖಕರ, ಪರವಾಗಿ ಶ್ರೀ ನಾರಾಯಣ, ಶ್ರೀಮತಿ ರಾಜಲಕ್ಷ್ಮಿ ಹಾಗೂ ಅವರ ತಂಡದ ನಿಸ್ವಾರ್ಥ ಕನ್ನಡ ಸೇವೆಗೆ ನಮ್ಮ ಕೃತಜ್ಞತೆಗಳು. ದೂರದ ದೇಶದಲ್ಲಿ ನಮ್ಮ ಭಾಷೆ , ಸಂಸ್ಕೃತಿಗಳನ್ನು ಉಳಿಸಿ, ಬೆಳೆಸುತ್ತಿರುವ ನಿಮ್ಮ ಕೆಲಸ ಸ್ತುತರ್ಹ್ಯ!
ಎಲ್ಲಾ ಓದುಗರು, ಬರಹಗಾರರ ಪರವಾಗಿ ನಾನು ನಿಮ್ಮಿಬ್ಬರನ್ನು ಅಭಿನಂದಿಸುತ್ತೇನೆ, ಮುಂದಿನ ಸಂಚಿಕೆಗಾಗಿ ಯಾವಾಗಲೂ ಎದುರು ನೋಡುತ್ತೇನೆ. ಧನ್ಯವಾದಗಳು.
ReplyDeleteಹೊರನಾಡ ಚಿಲುಮೆ ತಂಡವು ನಿರಂತರವಾಗಿ ಸ್ಥಳೀಯ ಹಾಗೂ ಉದಯೋನ್ಮುಖ ಲೇಖಕರಿಗೆ ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಅವರು ತಮ್ಮಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿಕೊಳ್ಳಲು ಮತ್ತು ಹೊರತರಲು ಉತ್ತೇಜನ ನೀಡುತ್ತಾ ಬಂದಿದ್ದಾರೆ. ಅದಕ್ಕಾಗಿ ಅವರಿಗೆ ನಮ್ಮ ಕೃತಜ್ಞತೆಗಳು.
ReplyDeleteಹೊರನಾಡಲ್ಲಿ ಶ್ರೀಯುತ ನಾರಾಯಣ್ ಮುಂದಾಳತ್ದದಲ್ಲಿ, ಕನ್ನಡದ ಚಿಲುಮೆಯನ್ನು ಚಿಮ್ಮಿಸುತ್ತಿರುವ ಇಡೀ ತಂಡಕ್ಕೆ ನೂರರ ಸಂಭ್ರಮದ ಸಂದರ್ಭದಲ್ಲಿ ಹೃತ್ಪೂರ್ವಕ ಅಭಿನಂದನೆಗಳು..
ReplyDeleteಸಾಗುತಿರಲಿ ಹೀಗೆ ನಿರಂತರ ಈ ಗಟ್ಟಿ ಪಯಣ ..
ಮಾಡುತ ನಾಡುನುಡಿಯ ಒಪ್ಪ ಓರಣ..
ಕನ್ನಡ ಮನಸುಗಳಿಗೆ ಊಡುತ ಜ್ಞಾನ ಚೈತನ್ಯ ಪೂರ್ಣ... ♥️👌🙌🙏